‘ದೋಣಿ’ ನನ್ನ ದೇಹ. ಪ್ರಜ್ಞೆ, ಅದ ಹತ್ತಿ ಕುಳಿತ ‘ಪ್ರಯಾಣಿಕ’.ಆ ತುದಿಯಲ್ಲಿ, ಅಂಬಿಗನಂತೆ ಕುಳಿತಿರುವ, ಅಸ್ಪಷ್ಟವಾದ ಆಕೃತಿಯನ್ನೇ ದೇವರೆಂದು ನಂಬಿ ಈ ಪ್ರಯಾಣ ಪ್ರಾರಂಭವಾಗಿತ್ತು.. ಅಂಬಿಗನ ಮೇಲೆ ಅಚಲವಾದ ನಂಬಿಕೆಯೇನೋ ಇತ್ತು. ಅಲೆಗಳು ಸಣ್ಣಗಿದ್ದವೋ? ಅಂಬಿಗನು ಸಮರ್ಥನಿದ್ದನೋ? ಪ್ರಯಾಣವೂ
ಚಿಕ್ಕಂದಿನಲ್ಲಿ, ನಮ್ಮ ದೇಶದ ಬಗ್ಗೆ ಅಭಿಮಾನ ಮೂಡಿಸುವ ಪಾಠಗಳ ಅಧ್ಯಾಯಗಳಲ್ಲಿ, ನಮ್ಮ ದೇಶ ಬೇರೆ ದೇಶಗಳಿಗಿಂತ ಏಕೆ ವಿಭಿನ್ನ ಎಂಬ ವಿಷಯ ಬಂದಾಗ ಮೊದಲು ಬಿಂಬಿಸುತ್ತಿದ್ದ ವಿಚಾರವೆಂದರೆ, ನಮ್ಮಲ್ಲಿರುವ ವೈವಿಧ್ಯತೆಗಳ ನಡುವೆಯೂ ದೇಶ ಏಕತೆಯಿಂದ ಹೇಗೆ ಮುನ್ನಡೆಯುತ್ತಿದೆ ಎಂಬುವುದು.
ಮೊನ್ನೆ ಕನ್ನಡದ ಚಾರ್ಲಿ ಸಿನಿಮಾ ನೋಡಲು ಹೋಗಿದ್ದೆವು. ಪಕ್ಕದ ಸೀಟಿನಲ್ಲಿ ಒಬ್ಬ ಚಿಕ್ಕ ಹುಡುಗ ಕುಳಿತಿದ್ದ. ಚಿತ್ರದಲ್ಲಿ ನಾಯಿ ಹಿಮದ ರಾಶಿಯನ್ನು ಕಂಡು, ಅದರ ಮೇಲೆ ಕುಪ್ಪಳಿಸುವ ದೃಶ್ಯ ಬಂದ ಕೂಡಲೇ ಆತ ಅಪ್ಪನನ್ನುಕೇಳಿದ, “ಅಪ್ಪ, ಅದು ಫೇಕ್
ದೇವಸ್ಥಾನಗಳ ಗರ್ಭಗುಡಿಯ ಸುತ್ತಲಿನ ಪ್ರಾಂಗಣದಲ್ಲಿ ಹಾಕುವ ಫಲಕಗಳ ಮೇಲೆ, ಮಂತ್ರಗಳ ತುಣುಕುಗಳನ್ನೋ, ಧರ್ಮಗ್ರಂಥಗಳ ಸಾರಗಳನ್ನೋ, ಹಿತವಚನಗಳ ಉಲ್ಲೇಖಗಳನ್ನೋ ನಾವೆಲ್ಲಾ ಗಮನಿಸಿರುತ್ತೇವೆ. ಹಾಗೆ ಎಲ್ಲೋ ಒಂದು ನೋಡಿದ ಸಾಲು: “ಬೆಂಕಿಗೆ ಬಿದ್ದ ಸೌದೆಯು, ಶಾಖದ ಉರಿಗೆ ತಾನೂ ಹೇಗೆ ಪವಿತ್ರ
ಒಂದು ಕಾಲದಲ್ಲಿ ಸೈಕಲ್ ಹ್ಯಾಂಡಲ್ ಮೇಲೆ ಸಿಕ್ಕಿಸಿಕೊಂಡ ಚಿಕ್ಕ ಡೈನಮೊ ಲೈಟಿನ ಬೆಳಕಿನಲ್ಲೇ ಜನರು ರಾತ್ರಿ ಮನೆ ತಲುಪಿ ಬಿಡುತ್ತಿದ್ದರು. ಇಂದು ಕಾರು, ಬೈಕುಗಳಲ್ಲಿ ಬರುವ ದೊಡ್ಡ ದೀಪಗಳು ಕೂಡ ನಮಗೆ ಸರಿಯಾಗಿ ದಾರಿ ತೋರಿಸವು. ಹಳ್ಳಿಗಾಡುಗಳ ಗಾಢ