ಒಂದು ಕಥೆ ಹೇಗಿರಬೇಕು? ಹೋಟೆಲಿನಲ್ಲಿ ಸುಮ್ಮನೆ ಕುಳಿತು order ಮಾಡಿದಾಗ ಸಿಗುವ ಸಿದ್ಧಪಡಿಸಿಟ್ಟಿದ್ದ ಊಟದಂತೆಯೇ? ಅಥವಾ ಪರಿಕರಗಳನ್ನೆಲ್ಲ ನಮ್ಮ ಮುಂದಿರಿಸಿ ನಮಗಿಷ್ಟವಾದದ್ದನ್ನು ತಯಾರಿಸುವ ಸ್ವಾತಂತ್ರ್ಯ ಕೊಡುವ, ಅಡುಗೆಯನ್ನು ತಯಾರಿಸುವಾಗ ಸಕ್ರಿಯವಾಗಿ ಭಾಗವಹಿಸಿ, ಉಪ್ಪು, ಹುಳಿ, ಖಾರವನ್ನು ನಮ್ಮ ರುಚಿಗೆ
ಕನ್ನಡದ ‘ತಿಥಿ’ ಚಲನಚಿತ್ರದ ನಂತರ ಮನಸ್ಸಿನಲ್ಲಿ ತೀವ್ರವಾಗಿ ಉಳಿದಂಥ ಮಲಯಾಳಂ ಭಾಷೆ ಚಿತ್ರ : Nanpakal Nerathu Mayakkam (ಮಧ್ಯಾಹ್ನದ ಕನಸಿನಂತೆ). ಹೆಸರು ಬಲು ಕ್ಲಿಷ್ಟಕರ. ಹಾಗೆಯೇ ಚಿತ್ರದ ಕಥೆಯ ಗ್ರಹಿಕೆಯು ಕೂಡ. ಬರಿ ಚಲನಚಿತ್ರವೆಂದರೆ ತಪ್ಪಾದೀತು. ಮತ್ತೆ
ಯಕ್ಷಗಾನವೆಂಬುದು ಒಂದು ಅನುಭವ. ಅಬ್ಬರವಲ್ಲ.ಯಕ್ಷಗಾನದಂತಹ ಪ್ರಾಂತ್ಯೀಯ ಕಲೆಗಳಿಗೆ ಜೀವ ನೀಡುವುದು ಅವುಗಳ ಸಾತ್ವಿಕ, ಮೂಲಭೂತ ಶೈಲಿ.ಜಾನಪದ ಎಂಬುದು ಯಾವತ್ತೂ , ಆ ಕಲೆಯು ಪ್ರಚಲಿತವಾಗಿರುವ ಪ್ರದೇಶದ ಜನರ ಸಾಂಸ್ಕೃತಿಕ ರುಚಿಯ ಪ್ರತಿಬಿಂಬವಾಗಿರುತ್ತದೆ.ಪ್ರಾದೇಶಿಕ ಕಲೆಯನ್ನು ಪ್ರಚಾರಪಡಿಸುವ ಉದ್ದೇಶವೆಂದು ಸಾರಿ, ಅದರ
ಈ ಕಾದಂಬರಿ ಎನ್ನಲಾಗದ ಪುಸ್ತಕಕ್ಕೆ ಇತರ ಯಾವುದೇ ಲೇಖಕರ ಮುನ್ನುಡಿ ಇಲ್ಲ. ಸ್ವತಃ ಲೇಖಕರೇ, ಅಸಡ್ಡೆಯಿಂದಲೇನೋ ಎಂಬಂತೆ, ಇನ್ಯಾವುದೋ ಕಾದಂಬರಿಯ ತಾಲೀಮಿಗೆಂದು ಬರೆದ ಕಥೆ ಇದು ಎಂದು ಹೇಳಿ, ನಿಮಗಿಷ್ಟವಾಗದಿದ್ದಲ್ಲಿ ನನ್ನ ಹೊಣೆ ಅಲ್ಲ ಎಂಬಂತೆ ಕೈತೊಳೆದುಕೊಂಡಂತಿದೆ. ಇದು
ಬೆಳಿಗ್ಗೆ ಬೇಗನೆ ಎಚ್ಚರವಾಯಿತು. ಸುಮ್ಮನೆ ಹೊರಗೆ ಬಂದು ಕೂತವನಿಗೆ, ಎದುರಿನ ಕಟ್ಟಡದಲ್ಲಿ ಒಂದು ಪಾರಿವಾಳ ತೋರಿತು. ಒಂದಷ್ಟು ಹೊತ್ತು ಸುಮ್ಮನೆ ದಿಗಂತದೆಡೆ ದಿಟ್ಟಿಸುತ್ತಾ, ಮರುಕ್ಷಣ ಆತಂಕದಿಂದ ಎಂಬಂತೆ ಆಚೆ ಈಚೆ ತಿರುಗಾಡುತ್ತಾ, ಮತ್ತೆ ಏನೋ ನೆನಪಾದಂತೆ ಆಲೋಚಿಸುತ್ತಾ, ತನ್ನ
ಹೊಸ ಮನೆ ಖರೀದಿಸುವಾಗ, ಮನೆಯ ನೆಲಕ್ಕೆ ಹಾಸಿರುವ ಬಿಲ್ಲೆಯನ್ನು (tiles) ಪರೀಕ್ಷಿಸುವ ಸಲುವಾಗಿ, ಅಲ್ಲಲ್ಲಿ ಹದವಾಗಿ ಕುಟ್ಟಿ ಪರೀಕ್ಷೆ ಮಾಡಬೇಕಾಗುತ್ತದೆ. ಯಾವ ಭಾಗದಲ್ಲಿ ಸರಿಯಾಗಿ ಕಾಂಕ್ರೀಟ್ ತುಂಬಿ ಬಿಲ್ಲೆಯನ್ನು ಕೂಡಿಸಿರುವುದಿಲ್ಲವೋ, ಆ ಜಾಗ ಟೊಳ್ಳು ಶಬ್ದ ಮಾಡುತ್ತಿರುತ್ತದೆ. ಟೊಳ್ಳು
ಸುಮಾರು ೭ ವರುಷಗಳ ನಂತರ ‘ತಿಥಿ’ ಚಲನಚಿತ್ರವನ್ನು ಮತ್ತೆ ನೋಡುವ ಮನಸ್ಸಾಯಿತು. ತುಂಬಾ ನೆನಪಿನಲ್ಲಿ ಉಳಿಯುವಂಥ, ಹಾಗು ಇನ್ನೂ ಇಷ್ಟವಾಗಿಯೇ ಉಳಿದಿರುವಂಥ ಬೆರಳೆಣಿಕೆಯಷ್ಟು ಸಿನೆಮಾಗಳಲ್ಲಿ ತಿಥಿ ಆಗ್ರ ಸ್ಥಾನದಲ್ಲಿಯೇ ನಿಲ್ಲುತ್ತದೆ. ಇದೇ ಕಾರಣಕ್ಕಾಗಿ ರಂಜನಿ ಜೊತೆ ಈ ಚಿತ್ರವನ್ನು
ಮೊನ್ನೆ ಕನ್ನಡದ ಚಾರ್ಲಿ ಸಿನಿಮಾ ನೋಡಲು ಹೋಗಿದ್ದೆವು. ಪಕ್ಕದ ಸೀಟಿನಲ್ಲಿ ಒಬ್ಬ ಚಿಕ್ಕ ಹುಡುಗ ಕುಳಿತಿದ್ದ. ಚಿತ್ರದಲ್ಲಿ ನಾಯಿ ಹಿಮದ ರಾಶಿಯನ್ನು ಕಂಡು, ಅದರ ಮೇಲೆ ಕುಪ್ಪಳಿಸುವ ದೃಶ್ಯ ಬಂದ ಕೂಡಲೇ ಆತ ಅಪ್ಪನನ್ನುಕೇಳಿದ, “ಅಪ್ಪ, ಅದು ಫೇಕ್
ದೇವಸ್ಥಾನಗಳ ಗರ್ಭಗುಡಿಯ ಸುತ್ತಲಿನ ಪ್ರಾಂಗಣದಲ್ಲಿ ಹಾಕುವ ಫಲಕಗಳ ಮೇಲೆ, ಮಂತ್ರಗಳ ತುಣುಕುಗಳನ್ನೋ, ಧರ್ಮಗ್ರಂಥಗಳ ಸಾರಗಳನ್ನೋ, ಹಿತವಚನಗಳ ಉಲ್ಲೇಖಗಳನ್ನೋ ನಾವೆಲ್ಲಾ ಗಮನಿಸಿರುತ್ತೇವೆ. ಹಾಗೆ ಎಲ್ಲೋ ಒಂದು ನೋಡಿದ ಸಾಲು: “ಬೆಂಕಿಗೆ ಬಿದ್ದ ಸೌದೆಯು, ಶಾಖದ ಉರಿಗೆ ತಾನೂ ಹೇಗೆ ಪವಿತ್ರ
ಒಂದು ಕಾಲದಲ್ಲಿ ಸೈಕಲ್ ಹ್ಯಾಂಡಲ್ ಮೇಲೆ ಸಿಕ್ಕಿಸಿಕೊಂಡ ಚಿಕ್ಕ ಡೈನಮೊ ಲೈಟಿನ ಬೆಳಕಿನಲ್ಲೇ ಜನರು ರಾತ್ರಿ ಮನೆ ತಲುಪಿ ಬಿಡುತ್ತಿದ್ದರು. ಇಂದು ಕಾರು, ಬೈಕುಗಳಲ್ಲಿ ಬರುವ ದೊಡ್ಡ ದೀಪಗಳು ಕೂಡ ನಮಗೆ ಸರಿಯಾಗಿ ದಾರಿ ತೋರಿಸವು. ಹಳ್ಳಿಗಾಡುಗಳ ಗಾಢ